ಕುಮಟಾ:ತಾಲೂಕಿನ ಸಂತೇಗುಳಿಯ ನಿವಾಸಿ ಮಂಜುನಾಥ್ ಮಹಾದೇವ ನಾಯ್ಕ ನಾಪತ್ತೆಯಾದ ಯುವಕನಾಗಿದ್ದು,ಹುಡುಕಿಕೊಡುವಂತೆ ಪಾಲಕರು ಪೊಲೀಸರ ಮೊರೆ ಹೋಗಿದ್ದಾರೆ.

ಹೌದು…ದಿನಾಂಕ 17/3/2025 ರ ಸಂಜೆ ಸುಮಾರಿಗೆ ಮನೆಯಿಂದ ಹೊರಟವನು ಇಲ್ಲಿಯವರೆಗೆ ಮನೆಗೆ ಮರಳಿ ಬಂದಿಲ್ಲ ಎಂದು ಕಲವಳಗೊಂಡ ಪೋಷಕರು ಕುಮಟಾ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದಾರೆ.
ಹಾಗೆಯೇ ಯುವಕನನ್ನು ಪತ್ತೆಹಚ್ಚುವ ಕಾರ್ಯಕ್ಕೆ ಪೊಲೀಸರು ಮುಂದಾಗಿದ್ದು ತಾಲ್ಲೂಕಿನ ಪಿಕಪ್ ಬಸ್ಸ ನಿಲ್ದಾಣದ ಸ್ಥಳದಿಂದ ನಾಪತ್ತೆ ಆಗಿದ್ದು, ಆತನ ಮೊಬೈಲ್ ಫೋನ್ ಕುಮಟಾ ಪಟ್ಟಣದ 500 ಮೀಟರ್ ದೂರದಲ್ಲಿ ಸ್ವಿಚ್ಡ ಆಪ್ ಆಗಿದೆ ಎಂದು ತಿಳಿದುಬಂದಿದೆ.
ಈ ಯುವಕ ಎಲ್ಲಿಯಾದರೂ ಕಂಡ ತಕ್ಷಣ ಕುಮಟಾ ಪೋಲಿಸ್ ಠಾಣೆ 08386222333 ಹಾಗೂ 7760779581,96865 20220 ಕರೆಮಾಡಿ.


Leave a Reply